ಮಡಿಕೇರಿ, ನ. 29: ನಗರದ ರಾಣಿಪೇಟೆ ಹಾಗೂ ದಾಸವಾಳ ಬಡಾವಣೆಗಳ ಕುಡಿಯುವ ನೀರಿನ ಬವಣೆಯನ್ನು ನೀಗಿಸಲು ಎಸ್‍ಎಫ್‍ಸಿ ಯೋಜನೆಯ 2017-18ನೇ ಸಾಲಿನ ಅನುದಾನದಡಿ ಇತ್ತೀಚೆಗೆ ಕೊಳವೆ ಬಾವಿಯನ್ನು ಕೊರೆಸಲಾಗಿದೆ ಎಂದು ಸ್ಥಳೀಯ ನಗರಸಭಾ ಸದಸ್ಯರಾದ ತಜಸ್ಸುಂ ತಿಳಿಸಿದ್ದಾರೆ.

ಬಡಾವಣೆಯ ನಿವಾಸಿಗಳ ಅನುಕೂಲಕ್ಕಾಗಿ ಕೊಳವೆ ಬಾವಿಗೆ ಜಾಗವನ್ನು ನೀಡಿದ ಶ್ರೀ ಚೌಡೇಶ್ವರಿ ದೇವಾಲಯದ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸುವದಾಗಿ ತಿಳಿಸಿರುವ ಅವರು, ಆರನೇ ವಾರ್ಡ್‍ನ ರಾಣಿಪೇಟೆಯ ರಸ್ತೆ ಮರು ಡಾಮರೀಕರಣ, ತಡೆಗೋಡೆ ಕಾಮಗಾರಿ ಹಾಗೂ ಸಿ.ವಿ. ಶಂಕರ ರಸ್ತೆಯ ಮರುಡಾಮರೀಕರಣ ಕಾರ್ಯಕ್ಕೆ ಶೀಘ್ರ ಚಾಲನೆ ನೀಡಲಾಗುವದೆಂದು ತಜಸ್ಸುಂ ತಿಳಿಸಿದ್ದಾರೆ.