ಗೋಣಿಕೊಪ್ಪಲು, ನ. 29: ಮಡಿಕೇರಿಯ ಸಂತ ಮೈಕಲರ ಶಾಲೆಯಲ್ಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಧಾರ್ಮಿಕ ಪಠಣ ವಿಭಾಗದಲ್ಲಿ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಮೊಹಮ್ಮದ್ ಸುಲ್ತಾನ್ ಪ್ರಥಮ ಸ್ಥಾನಗಳಿಸಿ ಇದೀಗ ಮೈಸೂರುವಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಮೊಹಮದ್ ಸುಲ್ತಾನ್ ಗೋಣಿಕೊಪ್ಪಲುವಿನ ಮಹಮ್ಮದ್ ಕೌಸರ್ ಹಾಗೂ ಸಾದಿಯ ಕೌಸರ್ ದಂಪತಿಗಳ ಪುತ್ರನಾಗಿದ್ದಾನೆ.