ಮಡಿಕೇರಿ, ನ. 30: ನಗರದಲ್ಲಿ ಡಿ. 1 ರಂದು (ಇಂದು) ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ, ಜನಾಗ್ರಹ ಸಭೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಬನ್ನಿ ಮಂಟಪ ಬಳಿಯಿಂದ ಮೆರವಣಿಗೆ ಬಳಿಕ 4 ಗಂಟೆಗೆ ಗಾಂಧಿ ಮೈದಾನದಲ್ಲಿ ಸಭೆ ಜರುಗಲಿದ್ದು, ಸಂತರು, ಧಾರ್ಮಿಕ ಮುಖಂಡರು ಮಾರ್ಗದರ್ಶನ ನೀಡಲಿದ್ದಾರೆ ಎಂದು ವಿ.ಹಿಂ.ಪ. ಮತ್ತು ಬಜರಂಗದಳ ಪ್ರಕಟಣೆ ತಿಳಿಸಿದೆ.