ಮಡಿಕೇರಿ, ನ. 30: ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಡಿ.1 ರಂದು (ಇಂದು) ಸಂಜೆ 6.30ರ ಬಳಿಕ ವಿಶೇಷ ಮಹಾಪೂಜೆಯೊಂದಿಗೆ ಕಾರ್ತಿಕ ಮಾಸದ ತೆಪ್ಪೋತ್ಸವ ಸೇವೆಯು, ದೇಚೂರು ನಿವಾಸಿ, ಕೆ.ಎಸ್. ಆನಂದ್ ಕುಟುಂಬದಿಂದ ಜರುಗಲಿದೆ ಎಂದು ದೇವಾಲಯ ವ್ಯವಸ್ಥಾಪನಾ ಸಮಿತಿ ಪ್ರಕಟಣೆ ತಿಳಿಸಿದೆ. ಅಲ್ಲದೆ ಶ್ರೀ ಆಂಜನೇಯ ಗುಡಿಯಲ್ಲಿ ಸಂಜೆ ಶನಿ ಕಲ್ಪೋಕ್ತ ಪೂಜೆಯು ನೆರವೇರಲಿದೆ ಎಂದು ತಿಳಿಸಿದೆ.