ಮಡಿಕೇರಿ, ನ. 30 : ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ಪುಸ್ತಕ ಭಂಡಾರಕ್ಕಾಗಿ ಕಿಗ್ಗಾಲು ಗ್ರಾಮದ ಸಾಹಿತಿ ಕಿಗ್ಗಾಲು ಗಿರೀಶ್ ಅವರು ಉದಾರವಾಗಿ ಚೆಕ್ ನೀಡಿ ಧನಸಹಾಯ ಮಾಡಿದರು. ಕಾಲೇಜಿನ ಲೈಬ್ರರಿಯನ್ ಕಲ್ಪನಾ ಅವರ ಉಪಸ್ಥಿತಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಪಟ್ಟಡ ಪೂವಣ್ಣ ಚೆಕ್ ಸ್ವೀಕರಿಸಿದರು. ಉಪನ್ಯಾಸಕ ನಾಟೋಳಂಡ ನವೀನ್ ಮತ್ತು ಕಿಗ್ಗಾಲು ಹರೀಶ್ ಹಾಜರಿದ್ದರು.