ಚೆಟ್ಟಳ್ಳಿ, ಡಿ. 1: ಮಡಿಕೇರಿಯ ಹಿರಿಯ ಕಾರ್ಮಿಕ ನಿರೀಕ್ಷಕ ಎಮ್.ಎಮ್. ಯತ್ನಟಿ ಮತ್ತು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಆರ್. ಶೀರಾಝ್ ಅಹ್ಮದ್ ಅವರು ಜಂಟಿಯಾಗಿ ಕಡಗದಾಳು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಯೊಂದಿಗೆ ಶಾಲೆಯಿಂದ ಹೊರಗುಳಿದ ಮತ್ತು ಬಾಲ ಕಾರ್ಮಿಕ ಮಕ್ಕಳ ಪರಿಶೀಲನೆಗಾಗಿ ವಿವಿಧ ಕಾಫಿ ತೋಟಗಳಿಗೆ ಜಂಟಿಯಾಗಿ ಭೇಟಿ ನೀಡಿ ಪರಿಶೀಲಿಸಿದರು.

18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ತೋಟದ ಮಾಲೀಕರುಗಳಿಗೆ ಎಚ್ಚರಿಸಲಾಯಿತು.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ತಪ್ಪದೇ ಕಳಿಸುವಂತೆ ಎಚ್ಚರಿಸಿದರು.

ಇದೆ ವೇಳೆ ಕಡಗದಾಳು, ಚೆಟ್ಟಳ್ಳಿ ಮತ್ತು ಅಬ್ಯಾಲ ಗ್ರಾಮದ ಸಾರ್ವಜನಿಕರಿಗೂ 18 ವರ್ಷದೊಳಗಿನ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಕರಪತ್ರ ನೀಡುವ ಮೂಲಕ ತಿಳುವಳಿಕೆ ನೀಡಲಾಯಿತು.