ಮಡಿಕೇರಿ, ಡಿ. 1: ಇತ್ತೀಚೆಗೆ ಅಕಾಲಿಕವಾಗಿ ಮೃತಪಟ್ಟ ಗೂಡ್ಸ್ ಟೆಂಪೋ ಮಾಲೀಕರು ಹಾಗೂ ಚಾಲಕರ ಸಂಘದ ಸದಸ್ಯ ಮಹೇಂದ್ರವರ್ಮ (ಮಹೇಶ್) ಅವರ ಕುಟುಂಬಕ್ಕೆ ಸಂಘದ ವತಿಯಿಂದ ರೂ. 20 ಸಾವಿರ ನೆರವನ್ನು ನೀಡಲಾಯಿತು.

ಮಹೇಂದ್ರವರ್ಮ ಅವರ ಮಗುವಿನ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ 20 ಸಾವಿರ ರೂಪಾಯಿಯ ಸುರಕ್ಷಾ ಸಮೃದ್ಧಿ ಯೋಜನೆಯ ಠೇವಣಿ ಇರಿಸಿದ್ದ ಬಾಂಡ್‍ನ್ನು ಪತ್ನಿ ಕೆ.ಎ. ಮಮತ ಅವರಿಗೆ ಸಂಘದ ಪ್ರಮುಖರು ಹಸ್ತಾಂತರಿಸಿದರು. ಸಂಘದ ಅಧ್ಯಕ್ಷ ಎಂ.ಆರ್. ಮಣಿಕಂಠ, ಕಾರ್ಯದರ್ಶಿ ಬಿ.ಎಸ್. ಜಯ ಮತ್ತು ಖಜಾಂಚಿ ಪ್ರಸಾದ್ ಹಾಗೂ ಸಂಘದ ಪದಾಧಿಕಾರಿಗಳು ಈ ಸಂದರ್ಭ ಹಾಜರಿದ್ದರು.