ಕುಶಾಲನಗರ, ಡಿ. 1: ಕುಶಾಲನಗರ ಸಮೀಪದ ಮಾದಾಪಟ್ಟಣ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ರಾಜ್ಯೋತ್ಸವ ಅಂಗವಾಗಿ ಕಾರ್ಯಕ್ರಮಗಳು ನಡೆದವು. ಸಂಘದ ನಿರ್ದೇಶಕ ಈಶ್ವರ್ ಧ್ವಜಾರೋಹಣ ನೆರವೇರಿಸಿದರು. ನಂತರ ಕನ್ನಡ ಧ್ವಜವನ್ನು ಹೊತ್ತ ಆಟೋಗಳ ಮೆರವಣಿಗೆ ನಡೆಯಿತು. ಪ್ರಮುಖರಾದ ಅಶೋಕ್, ಚಾಲಕರಾದ ಮನೋಹರ್, ಮಂಜುನಾಥ್, ಸುರೇಶ್, ವೆಂಕಟೇಶ್ ಮತ್ತಿತರರು ಇದ್ದರು.