ಗೋಣಿಕೊಪ್ಪ ವರದಿ, ಡಿ. 2: ಸುಮಾರು 82 ವರ್ಷ ಇತಿಹಾಸವಿರುವ ಕೈಕೇರಿ ಪುತ್ತರಿ ಊರೋರ್ಮೆ ಆಚರಣೆಯನ್ನು ಸಂತೋಷ ಕೂಟದ ಮೂಲಕ ಆಚರಿಸಲಾಯಿತು.

ಅಲ್ಲಿನ ಪಡಿಕಲ್ ಜಂಕ್ಷನ್‍ನಲ್ಲಿ ಆಯೋಜಿಸಿದ್ದ ಊರೋರ್ಮೆಯಲ್ಲಿ ಊರುಪತ್ತಿಯಲ್ಲಿ ಸದಸ್ಯತ್ವ ಪಡೆದ ಸದಸ್ಯರುಗಳು ಪಾಲ್ಗೊಂಡು ಸಂಭ್ರಮ ಪಟ್ಟರು. ಸಹಬೋಜನ ನಡೆಸಿದರು. ಗ್ರಾಮದಲ್ಲಿ ನಿಧನರಾದವರಿಗೆ ಸಂತಾಪ ಸೂಚಿಸಲಾಯಿತು.

ಊರುಪತ್ತಿ ಅಧ್ಯಕ್ಷ ಪಡಿಕಲ್ ಡಬ್ಲ್ಯೂ ಚೆಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪಡಿಕಲ್ ಸಂತೋಷ್ ವಾರ್ಷಿಕ ವರದಿ ವಾಚಿಸಿದರು. 1932ರಲ್ಲಿ ಆರಂಭಿಸಿದ ಊರುಪತ್ತಿಯನ್ನು ವರ್ಷಂಪ್ರತಿ ಆಚರಿಸುವ ಮೂಲಕ ಊರಿನ ಒಗ್ಗಟ್ಟು, ಹಿಂದಿನ ಆಚಾರ-ವಿಚಾರಗಳನ್ನು ಪೋಷಿಸುವ ಬಗ್ಗೆ ನಿರ್ಧರಿಸಲಾಯಿತು.

ಈ ಸಂದರ್ಭ ಪ್ರಮುಖರುಗಳಾದ ಪಡಿಕಲ್ ಯಾದವ್, ಮನೋಹರ್, ನಾಣಯ್ಯ, ಮುಕ್ಕಾಟಿ ಈರಪ್ಪ, ಎಂ. ಗಣೇಶ್, ಪಡಿಕಲ್ ಜಯೇಂಧ್ರ ಉಪಸ್ಥಿತರಿದ್ದರು. ಗ್ರಾಮಸ್ಥರು ಪಾಲ್ಗೊಂಡಿದ್ದರು.