ಕುಶಾಲನಗರ, ಡಿ. 3: ರಾಜ್ಯಮಟ್ಟದ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಕುಶಾಲನಗರ ಫಾತಿಮಾ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿ ರಜತ್ ಗುರುರಾಜ್ ಚೆಸ್ ಆಟದಲ್ಲಿ 4ನೇ ಸ್ಥಾನ ಪಡೆದು ರಾಷ್ಟ್ರಮಟ್ಟದಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿದ್ದಾನೆ. ಇತ್ತೀಚೆಗೆ ತುಮಕೂರು ಮಧುಗುರಿಯಲ್ಲಿ ನಡೆದ ಚೆಸ್ ಸ್ಪರ್ಧೆಯಲ್ಲಿ ವಿಜೇತನಾಗಿದ್ದು ತಾ. 11ಕ್ಕೆ ಮಹಾರಾಷ್ಟ್ರದ ದಾದ್ರ ಹವೇಲಿಯಲ್ಲಿ ನಡೆಯುವ ರಾಷ್ಟ್ರೀಯ ಪಂದ್ಯಾಟದಲ್ಲಿ ಪಾಲ್ಗೊಳ್ಳಲಿದ್ದಾನೆ. ಕುಶಾಲನಗರದ ಮಣಿ ತರಬೇತಿ ನೀಡುತ್ತಿದ್ದಾರೆ. ರಜತ್ ಗುರುರಾಜ್ ಹೌಸಿಂಗ್ ಬೋರ್ಡ್ ನಿವಾಸಿ ಡಿ. ನಾಗರಾಜ್ ಹಾಗೂ ನಂದಿನಿ ದಂಪತಿ ಪುತ್ರ.