ಸೋಮವಾರಪೇಟೆ,ಡಿ.2: ಮಹಾ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್‍ರವರ ಪರಿನಿರ್ವಾಣ ದಿನಾಚರಣೆ ತಾ.6ರಂದು ನಡೆಯಲಿದೆ ಎಂದು ದ.ಸಂ.ಸ (ಸಂಯೋಜಕ)ದ ಕೊಡಗು ಜಿಲ್ಲಾ ಸಮಿತಿಯ ಸಂಯೋಜಕರಾದ ಜೆ.ಆರ್. ಪಾಲಾಕ್ಷ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 11ಕ್ಕೆ ಪಟ್ಟಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವದು. ನಂತರ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಪಿಎಸ್‍ಐ ನಂಜುಂಡೇಗೌಡ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ದ.ಸಂ.ಸ.ದ ರಾಜ್ಯ ಸಂಘಟನಾ ಸಂಯೋಜಕರಾದ ಎಚ್.ಜೆ. ಹನುಮಯ್ಯ, ಮುಖಂಡರಾದ ಜಯಪ್ಪ ಹಾನಗಲ್ಲು, ಎಂ.ಪಿ. ಹೊನ್ನಪ್ಪ, ಗೋವಿಂದರಾಜ್ ಮತ್ತಿತರರು ಭಾಗವಹಿಸಲಿದ್ದಾರೆ.