ಕುಶಾಲನಗರ, ಡಿ. 3: ಗಣಪತಿ ದೇವಾಲಯ ಸಮಿತಿ ವತಿಯಿಂದ ಹಮ್ಮಿಕೊಂಡಿರುವ 98ನೇ ಗೋ ಪ್ರದರ್ಶನ ಹಾಗೂ ಜಾನುವಾರು ಜಾತ್ರೆ ಪ್ರಯುಕ್ತ ತಾ. 5 ರಂದು ಬೆಳಿಗ್ಗೆ 9.30 ಗಂಟೆಗೆ ಸೋಮೇಶ್ವರ ದೇವಾಲಯದಿಂದ ಮೆರವಣಿಗೆ ಮೂಲಕ ಗೋವುಗಳನ್ನು ಆಂಜನೇಯ ದೇವಾಲಯದ ಮೂಲಕ ರಥಬೀದಿಗಾಗಿ ಚೌಡೇಶ್ವರಿ ದೇವಾಲಯ, ಕನ್ನಿಕಾ ಪರಮೇಶ್ವರಿ ದೇವಾಲಯದ ಮೂಲಕ ಗಣಪತಿ ದೇವಾಲಯದ ಮುಂಬದಿ ಮುಖ್ಯರಸ್ತೆಯಲ್ಲಿ ಜಾತ್ರೆ ಮೈದಾನಕ್ಕೆ ತರಲಾಗುತ್ತದೆ ಎಂದು ಗೋವುಗಳ ಜಾತ್ರಾ ಸಮಿತಿಯ ಸಂಚಾಲಕ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರೂ ಆದ ಬಿ. ಅಮೃತ ರಾಜು ಮನವಿ ಮಾಡಿದ್ದಾರೆ.