ಸಿದ್ದಾಪುರ, ಡಿ. 3: ನೆಲ್ಯಹುದಿಕೇರಿಯ ದಾರುನ್ನಜಾತ್ ಸುನ್ನೀ ಸೆಂಟರ್ ನಲ್ಲಿ ಈದ್ ಮಿಲಾದ್ ಆಚರಣೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಕಾಂಗ್ರೆಸ್ ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಹಾಗೂ ಡಾಕ್ಟರೇಟ್ ಪದವಿ ಸ್ವೀಕರಿಸಿರುವ ಸಿದ್ದಾಪುರದ ಪಿ.ಸಿ. ಹಸೈನಾರ್ ಹಾಜಿ ಅವರನ್ನು ಈದ್ ಮಿಲಾದ್ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭ ದಾರುನ್ನಜಾತ್ ವಿದ್ಯಾರ್ಥಿಗಳು ಹೊರ ತಂದಿರುವ ಕುಸುಮ ಕೈ ಬರಹ ಮಾಸಿಕ ಪುಸ್ತಕವನ್ನು ಪಿ.ಸಿ ಹಸೈನಾರ್ ಹಾಜಿ ಬಿಡುಗಡೆಗೊಳಿಸಿದರು. ನಂತರ ಮದರಸ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.

ಈ ಸಂದರ್ಭ ಈದ್ ಮಿಲಾದ್ ಸಮಿತಿಯ ಪ್ರಮುಖರಾದ ಮಹಮ್ಮದ್ ಮದನಿ, ಬಸೀರ್ ಸಖಾಫಿ, ಜುಬೈರ್ ಸಹದಿ, ಉಸ್ಮಾನ್ ಸುಂಟಿಕೊಪ್ಪ, ಕೆ.ಎಂ. ಭಾವ, ಮಜೀದ್, ಹಸನ್, ಹಂಸ ಸೇರಿದಂತೆ ಮತ್ತಿತರರು ಇದ್ದರು.