ಭಾಗಮಂಡಲ, ಡಿ. 2: ಇತ್ತೀಚೆಗೆ ಚಿಕ್ಕಬಳ್ಳಾಪುರದ ಅಂಬೇಡ್ಕರ್ ಭವನದಲ್ಲಿ ಶ್ರೀ ಸಾಯಿ ಸೆಂಟರ್ ಫಾರ್ ಪರ್ಫಾಮಿಂಗ್ ಆಟ್ರ್ಸ್ ವತಿಯಿಂದ ನಡೆಸಲಾದ ರಾಷ್ಟ್ರೀಯ ಅಖಿಲ ಭಾರತ ನೃತ್ಯೋತ್ಸವ ಕಾರ್ಯಕ್ರಮದಲ್ಲಿ 179 ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಏಂಜೆಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡಾನ್ಸ್ ಶಾಲೆಯ ವಿದ್ಯಾರ್ಥಿಗಳು ಮತ್ತು ಇವರ ನೇತೃತ್ವದಲ್ಲಿ ಆಲೂರು ಸಿದ್ದಾಪುರದ ಜಾನಕಿ ಕಾಳಪ್ಪ ಶಾಲೆ, ಸಾಯಿ ಟ್ರಸ್ಟ್‍ನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. 26 ರಾಷ್ಟ್ರೀಯ ನಾಟ್ಯಕಲಾನಂದಿ ಎಂಬ ರಾಷ್ಟ್ರೀಯ ಬಿರುದು ಮತ್ತು ಈ ಶಾಲೆಯನ್ನು ಪ್ರತಿನಿಧಿಸಿದ್ದ ವಿದುಷಿ ಏಂಜೆಲ್ ರಶ್ಮಿ ಡಿಸೋಜ ಅವರಿಗೆ ರಾಷ್ಟ್ರೀಯ ಭೋಗ ನಂದೀಶ್ವರ ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು. ಅನೂಪ್ ಡಿಸೋಜ ಮತ್ತು ಏಂಜೆಲ್ ರಶ್ಮಿ ಇವರ ನೇತೃತ್ವದಲ್ಲಿ ನೃತ್ಯ ಶಾಲೆ ಕಾರ್ಯನಿರ್ವಹಿಸುತ್ತಿದೆ.