ಗೋಣಿಕೊಪ್ಪ ವರದಿ, ಡಿ. 3: ಪೊನ್ನಂಪೇಟೆ ಮುತ್ತಪ್ಪ ದೇವಸ್ಥಾನದಲ್ಲಿ ಪುತ್ತರಿ ವೆಳ್ಳಾಟಂ ಭಕ್ತಿಭಾವದಿಂದ ನಡೆಯಿತು. ಕೇರಳ ಸಂಪ್ರದಾಯದಲ್ಲಿ ಸುಗ್ಗಿಯ ನಂತರ ಹೊಸ ಅಕ್ಕಿಯ ನೈವೇದ್ಯ ತಯಾರಿಸಿ ಆಚರಿಸುವಂತೆ ಇಲ್ಲಿ ಆಚರಿಸಲಾಯಿತು. ಹೊಸ ಅಕ್ಕಿಯಿಂದ ತಯಾರಿಸಿದ ಪಾಯಸ, ನೈವೇದ್ಯವನ್ನು ದೇವರಿಗೆ ಅರ್ಪಿಸಿ ಭಕ್ತರಿಗೆ ಅನ್ನದಾನ ಮೂಲಕ ನೀಡಲಾಯಿತು. ಸುಮಾರು 2 ಸಾವಿರಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ವೆಳ್ಳಾಟಂನಲ್ಲಿ ದೇವರ ಕೋಲ ನಡೆದವು.