ಗೋಣಿಕೊಪ್ಪ ವರದಿ, ಡಿ. 2: ಇಗ್ಗುತ್ತಪ್ಪ ಕೊಡವ ಸಂಘ ಹಾಗೂ ಗೋಣಿಕೊಪ್ಪ ಕೊಡವ ಸಮಾಜದ ವತಿಯಿಂದ ಕೊಡಗಿನ 22 ಸಂತ್ರಸ್ತರಿಗೆ ತಲಾ ರೂ. 10 ಸಾವಿರ ಧನ ಸಹಾಯ ವಿತರಿಸಲಾಯಿತು.

ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜಿಸಿದ್ದ ಧನಸಹಾಯ ವಿತರಣಾ ಕಾರ್ಯಕ್ರಮದಲ್ಲಿ ಒಟ್ಟು ರೂ. 2.20 ಲಕ್ಷ ಹಣವನ್ನು ವಿತರಣೆ ಮಾಡಲಾಯಿತು.

ಕಾಲೂರು, ಮುಕ್ಕೋಡ್ಲು, ಹೆಮ್ಮೆತ್ತಾಳು ಗ್ರಾಮದ ಸಂತ್ರಸ್ತರು ಸಹಾಯ ಸ್ವೀಕರಿಸಿದರು.

ಈ ಸಂದರ್ಭ ಸಂತ್ರಸ್ತರು ಅನುಭವ ಹಂಚಿಕೊಂಡರು. ಸಂತ್ರಸ್ತರೊಂದಿಗೆ ಒಟ್ಟಾಗಿ ಭೋಜನ ಮಾಡಿ, ಗುಂಪು ಚಿತ್ರ ತೆಗೆಯುವ ಮೂಲಕ ಆತ್ಮಸ್ಥೈರ್ಯ ತುಂಬಲಾಯಿತು.

ಕೊಡವ ಸಮಾಜ ಅಧ್ಯಕ್ಷ ಚೆಕ್ಕೇರ ಸೋಮಯ್ಯ, ಕಾರ್ಯದರ್ಶಿ ಸಿ.ಡಿ. ಮಾದಪ್ಪ, ನಿರ್ದೇಶಕರುಗಳಾದ ಕೆ.ಟಿ. ಬಿದ್ದಪ್ಪ, ಕೆ.ಡಬ್ಲ್ಯು ಪೊನ್ನಪ್ಪ, ಸಣ್ಣುವಂಡ ವಿಶ್ವನಾಥ್, ಜಂಟಿ ಕಾರ್ಯದರ್ಶಿ ರೀಟಾ, ಇಗ್ಗುತ್ತಪ್ಪ ಕೊಡವ ಸಂಘ ಅಧ್ಯಕ್ಷೆ ಕೊಣಿಯಂಡ ಬೋಜಮ್ಮ, ಕಾಯದರ್ಶಿ ಅಜ್ಜಿಕುಟ್ಟೀರ ದೇವಯ್ಯ, ಉಪಾಧ್ಯಕ್ಷ ತಿರುನೆಲ್ಲಿಮಾಡ ದೇವಯ್ಯ, ಖಜಾಂಚಿ ನಾಚಪ್ಪ, ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ವಿತರಣೆ ಮಾಡಿದರು.