ಕುಶಾಲನಗರ, ಡಿ. 2: ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟದ ವತಿಯಿಂದ ಮೃತಪಟ್ಟ ಸಂಘಟನೆಯ ಸದಸ್ಯರ ಕುಟುಂಬಕ್ಕೆ ಸಹಾಯಧನ ನೀಡಲಾಯಿತು.

ಹಿರಿಯ ಸದಸ್ಯರಾದ ದೇವಯ್ಯ ಅವರು ಇತ್ತೀಚೆಗೆ ಮೃತಪಟ್ಟಿದ್ದು, ಒಕ್ಕೂಟದ ಅಧ್ಯಕ್ಷ ಕೆ.ಆರ್. ಜಗದೀಶ್ ಮತ್ತು ಜಿಲ್ಲಾ ಪ್ರಮುಖರಾದ ರವಿ ಅವರು 7 ಸಾವಿರ ರೂಪಾಯಿಗಳನ್ನು ನೀಡಿದರು.

ಈ ಸಂದರ್ಭ ಒಕ್ಕೂಟದ ಜಿಲ್ಲಾ ಘಟಕದ ಉಪಾಧ್ಯಕ್ಷ ದಿನೇಶ್ ಮತ್ತಿತರರು ಇದ್ದರು.