ಮಡಿಕೇರಿ, ಡಿ. 3: ಹೆಗ್ಗಳದ ಪೂಜಾರಿ ಬ್ರದರ್ಸ್, ಈಶ್ವರ ಬಿಲ್ಲವ ಸಂಘ ಹಾಗೂ ಬೇಟೋಳಿ ಗ್ರಾ.ಪಂ.ವತಿಯಿಂದ ಇತ್ತೀಚೆಗೆ ಶ್ರಮದಾನ ಕಾರ್ಯಕ್ರಮ ನಡೆಯಿತು. ರಸ್ತೆಯ ಬದಿಯ ಕಸ ತೆಗೆಯುವದು, ರಸ್ತೆಯ ಗುಂಡಿ ಮುಚ್ಚುವದು, ರಸ್ತೆ ಬದಿಯ ಕಾಡು ಕಡಿಯುವದರ ಮೂಲಕ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಈ ಆಂದೋಲನದಲ್ಲಿ ಜಿ.ಪಂ. ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಅಚ್ಚಪಂಡ ಹರೀಶ್, ಗ್ರಾ.ಪಂ. ಸದಸ್ಯ ಅಚ್ಚಪಂಡ ದಿನೇಶ್, ಲೀಲಾವತಿ, ವಸಂತ, ಕಾಂತಿ ವಸಂತ, ಹೆಗ್ಗಳದ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.