ಶನಿವಾರಸಂತೆ, ಡಿ. 2: ಶನಿವಾರಸಂತೆಯ ಭಾರತಿ ವಿದ್ಯಾಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ 2017-18ನೇ ಸಾಲಿನ ವಾರ್ಷಿಕ ಸಂಚಿಕೆ ‘ಭಾರತಿ’ಯನ್ನು ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ ಸಮಾರಂಭದಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಎಂ. ಆನಂದ್ ಅವರ ನೇತೃತ್ವದಲ್ಲಿ ಆಡಳಿತ ಮಂಡಳಿ ಪದಾಧಿಕಾರಿಗಳು, ನೌಕರರು ಬಿಡುಗಡೆಗೊಳಿಸಿದರು.

ಕಾಲೇಜು ಪ್ರಾಂಶುಪಾಲ ಇ.ಎಂ. ದಯಾನಂದ, ವಿದ್ಯಾ ಸಂಸ್ಥೆಯ ಅಧ್ಯಕ್ಷ ಎ.ಎಂ. ಆನಂದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಜಗನ್‍ಪಾಲ್, ನಿರ್ದೇಶಕರುಗಳಾದ ಬಿ.ಕೆ. ಚಿಣ್ಣಪ್ಪ, ಎನ್.ಬಿ. ನಾಗಪ್ಪ, ಹೆಚ್.ಪಿ. ಶೇಷಾದ್ರಿ, ಮಹಮದ್ ಪಾಷ, ಎನ್.ಕೆ. ಅಪ್ಪಸ್ವಾಮಿ, ಎನ್.ಜಿ. ಅರುಣ್, ಬಿ.ಟಿ. ರಂಗಸ್ವಾಮಿ, ಉತ್ತಪ್ಪ, ಪುಷ್ಪಾ ಪೊನ್ನಪ್ಪ, ಗಾಯತ್ರಿ, ಪ.ಪೂ. ಕಾಲೇಜು ಪ್ರಾಂಶುಪಾಲ ರವಿಕುಮಾರ್, ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.