ಕೂಡಿಗೆ, ಡಿ. 4: ಕೂಡಿಗೆ- ಹೆÀಬ್ಬಾಲೆ ಗ್ರಾ.ಪಂ. ವ್ಯಾಪ್ತಿಯ ಸೀಗೆಹೊಸೂರು, ಚಿನ್ನೆನಹಳ್ಳಿ ರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಹೆಚ್ಚು ಶ್ರೀ ಗಂಧದ ಮರಗಳಿದ್ದು, ಆ ಪ್ರದೇಶದಲ್ಲಿ ಶ್ರೀ ಗಂಧದ ಮರಗಳನ್ನು ಕಡಿದು ಸಾಗಾಟ ಮಾಡಲು ಸಂಗ್ರಹ ಮಾಡುತ್ತಿದ್ದ ಸಂದರ್ಭದಲ್ಲಿ ಅರಣ್ಯ ಇಲಾಖೆ ಧಾಳಿ ಮಾಡಿ ಭುವನಗಿರಿಯ ರಂಗ, ಭಾಸ್ಕರ್ , ಹುದುಗೂರು ಗ್ರಾಮದ ವಿಠಲ, ಸುರೇಶ್ ಎಂಬವ ರುಗಳನ್ನು ಬಂಧಿಸಿದೆ. ಸೋಮವಾರಪೇಟೆ ವಲಯ ಅರಣ್ಯಧಿಕಾರಿ ಲಕ್ಮಿಕಾಂತ್ ಮಾರ್ಗದರ್ಶನದಲ್ಲಿ ಕಣಿವೆ ಉಪ ಅರಣ್ಯ ಅಧಿಕಾರಿ ಚಂದ್ರೇಶ್, ಅರಣ್ಯ ರಕ್ಷಕರಾದ ಪ್ರಮೋದ್, ಚೇತನ, ಅರಣ್ಯ ವೀಕ್ಷಕರಾದ ರಾಜಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಶ್ರೀಗಂಧ ಮರ ಅಂದಾಜು ರೂ. ಎರಡು ಲಕ್ಷ ಮೊತ್ತದಾಗಿದೆ.