ಕುಶಾಲನಗರ, ಡಿ. 4: ಕುಶಾಲನಗರ ಗಣಪತಿ ದೇವಾಲಯ ಸಮಿತಿ ಆಶ್ರಯದಲ್ಲಿ 98ನೇ ಗೋಪ್ರದರ್ಶನ ಹಾಗೂ ಜಾನುವಾರು ಜಾತ್ರೆ ಕಾರ್ಯಕ್ರಮ ತಾ. 5 ರಿಂದ (ಇಂದಿನಿಂದ) ನಡೆಯಲಿದೆ. 3 ದಿನಗಳ ಕಾಲ ನಡೆಯಲಿರುವ ಗೋಜಾತ್ರೆ ಅಂಗವಾಗಿ ಇಂದು ಬೆಳಿಗ್ಗೆ 9.30 ಕ್ಕೆ ಸೋಮೇಶ್ವರ ದೇವಾಲಯದ ಬಳಿಯಿಂದ ಗೋವುಗಳನ್ನು ಮೆರವಣಿಗೆಯಲ್ಲಿ ಆಂಜನೇಯ ದೇವಾಲಯದ ಮೂಲಕ ರಥಬೀದಿಗಾಗಿ ಮುಖ್ಯರಸ್ತೆಯಲ್ಲಿ ತರಲಾಗುವದು. ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ಗೋಪ್ರದರ್ಶನ ಹಾಗೂ ಮಾರಾಟ ಮೇಳ 3 ದಿನಗಳ ಕಾಲ ನಡೆಯಲಿದೆ ಎಂದು ಗೋಪ್ರದರ್ಶನ ಸಮಿತಿಯ ಸಂಚಾಲಕ ಬಿ. ಅಮೃತ್‍ರಾಜ್ ತಿಳಿಸಿದ್ದಾರೆ.