ಮೂಲತಃ ಕಕ್ಕಬೆಯವರಾದ ಬೆಂಗಳೂರಿನಲ್ಲಿ ನೆಲೆಸಿರುವ ನಂಬುಡುಮಂಡ ಮಿಟ್ಟು ಉತ್ತಪ್ಪ ಅವರ ಪತ್ನಿ ನಂಬುಡುಮಂಡ ರುಕ್ಮಿಣಿ (65) ತಾ.3 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 5 ರಂದು (ಇಂದು) ಬೆಂಗಳೂರಿನ ಹೆಬ್ಬಾಳದ ಕೆಂಪಾಪುರ ಕ್ರಿಮಿಟೊರಿಯಂನಲ್ಲಿ ನಡೆಯಲಿದೆ.

ಟಮಡಿಕೇರಿಯ ರಾಘವೇಂದ್ರ ದೇವಾಲಯ ಸನಿಹದ ನಿವಾಸಿ, ಪೊಡನೋಳನ ಪೌತಿ ಗಣಪತಿ ಅವರ ಪ್ರಥಮ ಪುತ್ರಿ ಮಡಿಕೇರಿ ತಾ.ಪಂ. ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಪೊಡನೋಳನ ಕು. ಜಿ. ವಿಜಯ (53) ಅವರು ತಾ. 4 ರಂದು ನಿಧನರಾದರು. ಮೃತರ ಅಂತ್ಯಕ್ರಿಯೆ ತಾ. 5 ರಂದು (ಇಂದು) ಮಡಿಕೇರಿಯ ಗೌಡ ರುದ್ರಭೂಮಿ ಯಲ್ಲಿ ನೆರವೇರಲಿದೆ.

ಟಮೂರ್ನಾಡು ಕಾಂತೂರು ನಿವಾಸಿ ಅವರೆಮಾದಂಡ ಮಂದಣ್ಣ (79) ತಾ. 4ರಂದು ನಿಧನರಾದರು. ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ

ತಾ. 5 ರಂದು (ಇಂದು) ನಡೆಯಲಿದೆ. ಮೃತರು ಪತ್ನಿ, ನಾಲ್ವರು ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಮೃತರು ಮೂರ್ನಾಡು ವಿನ ಸುಗುಣ ಬಾರ್ ಮಾಲೀಕರಾಗಿದ್ದಾರೆ.