ಮಡಿಕೇರಿ, ಡಿ. 4: ಕೊಡಗಿನ ಅತಿವೃಷ್ಟಿ ಹಾನಿ ಸಂತ್ರಸ್ತರ ಬದುಕನ್ನು ಹಸನು ಮಾಡಲು ಅಗತ್ಯವಿರುವ ಪರಿಹಾರ ಕಾರ್ಯಗÀಳನ್ನು ಕೈಗೆತ್ತಿಕೊಳ್ಳುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿರುವ ಕೊಡಗು ಪ್ರಕೃತಿ ವಿಕೋಪ ಪರಿಹಾರ ಹೋರಾಟ ಸಮಿತಿ, ಮುಖ್ಯಮಂತ್ರಿ ಗಳು ಜಿಲ್ಲೆಗೆ ಆಗಮಿಸುವ ಸಂದರ್ಭ ಸಂತ್ರಸ್ತರ ಬೃಹತ್ ಜಾಥಾವನ್ನು ನಡೆಸಲು ನಿರ್ಧರಿಸಿರುವದಾಗಿ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಎಂ.ಬಿ.ದೇವಯ್ಯ, ಪರಿಹಾರ ಕಾರ್ಯಗಳಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಸೂಕ್ತ ಸ್ಪಂದನ ದೊರೆಯದೆ ಇರುವದರಿಂದ ಜಿಲ್ಲೆಯ ಎಲ್ಲಾ ಭಾಗಗಳ ಸಂತ್ರಸ್ತರು ಒಗ್ಗೂಡಿ ಜಾಥಾವನ್ನು ನಡೆಸಿ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಲಾಗುವದು ಎಂದರು.

ಕೇಂದ್ರ ಸರ್ಕಾರ ಪ್ರಕೃತಿ ವಿಕೋಪದ ಪರಿಹಾರವಾಗಿ ರಾಜ್ಯಕ್ಕೆ ಬಿಡುಗಡೆ ಮಾಡಿರುವ 546 ಕೋಟಿ ರೂ.ಗಳಲ್ಲಿ ಬಹುಭಾಗವನ್ನು ಕೊಡಗು ಜಿಲ್ಲೆಗೆ ನೀಡಬೇಕು ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ ಕೊಡಗಿನ ಸಂತ್ರಸ್ತರಿಗಾಗಿ ದಾನಿಗಳಿಂದ ಕ್ರೋಡೀಕರಣ ಗೊಂಡಿರುವ ಹಣದ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಅವರು ಒತ್ತಾಯಿಸಿದರು.

ಮಳೆಹಾನಿ ಸಂಭವಿಸಿ ನಾಲ್ಕು ತಿಂಗಳು ಕಳೆದರು ಪರಿಹಾರ ಕಾರ್ಯದ ಬಗ್ಗೆ ಸ್ಪಷ್ಟ ನಿಲುವು ತಳೆಯಲು ಜಿಲ್ಲಾಡಳಿತಕ್ಕೆ ಸಾಧ್ಯ ವಾಗಿಲ್ಲ. ಇನ್ನು ಮುಂದೆ ನಮ್ಮಿಂದ ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಹೋರಾಟದ ಮೂಲಕವೇ ಪರಿಹಾರವನ್ನು ಪಡೆಯುತ್ತೇವೆ ಎಂದು ದೇವಯ್ಯ ಸ್ಪಷ್ಟಪಡಿಸಿದರು. ಅಕ್ಕಿ, ಬಟ್ಟೆ, ತಾತ್ಕಾಲಿಕ ಆಶ್ರಯ ನೀಡುವದು ಸುಲಭ. ಆದರೆ, ಸ್ವಂತ ಜಾಗ, ಕೃಷಿ ಭೂಮಿ, ತೋಟವನ್ನು ಕಳೆÉದುಕೊಂಡ ವರು ಇನ್ನೂ ಅತಂತ್ರ ಸ್ಥಿತಿಯಲ್ಲೆ ದಿನದೂಡುತ್ತಿದ್ದಾರೆ. ಇವರ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕಾಗಿದೆ. ಇನ್ನು ಮೂರು, ನಾಲ್ಕು ತಿಂಗಳುಗಳಲ್ಲಿ ಮತ್ತೆ ಮಳೆಗಾಲ ಆರಂಭವಾಗುವ ದರಿಂದ ಹೂಳು ತೆಗೆಯದೇ ಇರುವ ನದಿಗಳಲ್ಲಿ ಪ್ರವಾಹದ ಪರಿಸ್ಥಿತಿ ಏರ್ಪಡುವ ಸಾಧ್ಯತೆ ಇದೆ. ಮಳೆಗಾಲಕ್ಕೂ ಮೊದಲು ಹೂಳು ತೆಗೆಯುವ ಕಾರ್ಯಕ್ಕೆ ಮುಂದಾಗಲಿ ಎಂದು ದೇವಯ್ಯ ಸಲಹೆ ನೀಡಿದರು.

ಸಮಿತಿಯ ಪ್ರಮುಖ ನಾಪಂಡ ರವಿ ಕಾಳಪ್ಪ ಮಾತನಾಡಿ, ಸಂತ್ರಸ್ತರ ಪರವಾಗಿ ಹೋರಾಟ ನಡೆಸುವ ಎಲ್ಲರಿಗೂ ನಮ್ಮ ಬೆಂಬಲವಿದೆ. ಸಂತ್ರಸ್ತರ ಸಮಿತಿಯಲ್ಲಿ ಎಲ್ಲರನ್ನು ಸೇರಿಸಿಕೊಳ್ಳಬೇಕಾಗಿತ್ತು, ಆದರೂ ಆ ಸಮಿತಿಯ ನಿರ್ಧಾರಗಳಿಗೆ ನಮ್ಮ ವಿರೋಧವಿಲ್ಲವೆಂದು ಸ್ಪಷ್ಪಪಡಿಸಿದರು.

ನಗರದ ಬನ್ನಿ ಮಂಟಪದಿಂದ ಆರಂಭಗೊಳ್ಳುವ ಜಾಥಾದಲ್ಲಿ ಸುಮಾರು 2 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ರವಿ ಕಾಳಪ್ಪ ತಿಳಿಸಿದರು.

ಗೌರವಾಧ್ಯಕ್ಷ ರವಿ ಕುಶಾಲಪ್ಪ ಮಾತನಾಡಿ, ಪರಿಹಾರ ಕಾರ್ಯಗಳು ಸಮರ್ಪಕವಾಗಿ ನಡೆಯದೆ ಸಂತ್ರಸ್ತರಲ್ಲಿ ಗೊಂದಲ ಮೂಡಿದ್ದು, ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸರ್ವ ಋತು ರಸ್ತೆಗಳನ್ನು ನಿರ್ಮಿಸಬೇಕೆಂದು ಒತ್ತಾಯಿಸಿದರು. ಕೆಲವು ತಜ್ಞರು ನೀಡಿರುವ ವರದಿಯಲ್ಲಿ ಮಾನವ ನಿರ್ಮಿತ ಅನಾಹುತವೆಂದು ಉಲ್ಲೇಖಿಸಿರುವದನ್ನು ವಿರೋಧಿಸುವ ದಾಗಿ ತಿಳಿಸಿದರು. ಒಂದೇ ದಿನದಲ್ಲಿ 22 ಇಂಚು ಮಳೆ ಸುರಿದ ಪರಿಣಾಮ ಈ ಅನಾಹುತ ಸಂಭವಿಸಿದೆಯೆಂದು ರವಿಕುಶಾಲಪ್ಪ ಸ್ಪಷ್ಟÀಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಕೆ.ಟಿ.ಪ್ರಸನ್ನ, ಉಪಾಧ್ಯಕ್ಷ ಎ.ಟಿ. ಮಾದಪ್ಪ ಹಾಗೂ ಸದಸ್ಯ ಭರತ್ ಉಪಸ್ಥಿತರಿದ್ದರು.