ಮಡಿಕೇರಿ, ಡಿ. 4: ಪ್ರವಾದಿ ನಿಂದನೆ ಪ್ರಕರಣದಲ್ಲಿ ಅಂಕಣಕಾರ ಸಂತೋಷ್ ತಮ್ಮಯ್ಯ ವಿರುದ್ಧ ದೂರು ನೀಡಿದ ದೂರುದಾರನಿಗೆ ಬೆದರಿಕೆ ಹಾಕಿದ ಆರೋಪದಡಿ ಭಜರಂಗದಳದ ದಕ್ಷಿಣ ಪ್ರಾಂತ್ಯ ಸಹ ಸಂಯೋಜಕ ರಘು ಸಕಲೇಶಪುರ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಇತ್ತೀಚೆಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ರಾಮಮಂದಿರ ನಿರ್ಮಾಣಕ್ಕೆ ನಡೆದ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಸಕಲೇಶಪುರ ರಘು ಎಂಬವರು ತನಗೆ ಬೆದರಿಕೆ ಹಾಕಿರುವದಾಗಿ ಸಿದ್ದಾಪುರದ ಅಸ್ಕರ್, ಮಡಿಕೇರಿ ನಗರ ಠಾಣೆಗೆ ತಾ. 3 ರಂದು ದೂರು ನೀಡಿದ್ದು, ಅದರಂತೆ ರಘು ಸಕಲೇಶಪುರ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ 506 ಐಪಿಸಿ ಸೆಕ್ಷನ್ ಪ್ರಕಾರ ಮೊಕದ್ದಮೆ ದಾಖಲಾಗಿದೆ.