ಮಡಿಕೇರಿ, ಡಿ. 4: ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ ಸಂಪಾಜೆ ಕೊಡಗು ಇದರ ವತಿಯಿಂದ ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಕಾರ್ಯಕ್ರಮ ಕಳೆದ 24 ವರ್ಷಗಳಿಂದ ಸಂಪಾಜೆಯಲ್ಲಿ ಭಕ್ತಾಭಿಮಾನಿಗಳ ಸಹಕಾರದಿಂದ iÀುಶಸ್ವಿಯಾಗಿ ನೆರವೇರಿದ್ದು, 2019 ರಲ್ಲಿ ರಜತ ಮಹೋತ್ಸವ ಆಚರಿಸಲು ತೀರ್ಮಾನಿಸಲಾಗಿದೆ. ಆ ಪ್ರಯುಕ್ತ ನೂತನ ಸಮಿತಿಯನ್ನು ದಿಸರ್ವ ಸಮಿತಿಗಳ ಸಭೆಯಲ್ಲಿ ರಚಿಸಲಾಯಿತು.

ಸಮಿತಿಯ ಗೌರವಾಧ್ಯಕ್ಷರಾಗಿ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಬಿ.ಆರ್. ಶಿವರಾಮ, ನಿವೃತ್ತ ಪ್ರಧಾನ ವ್ಯವಸ್ಥಾಪಕರು ಪಯಸ್ವಿನಿ ಪ್ರಾ.ಕೃ.ಪ.ಸ. ಸಂಘ ಸಂಪಾಜೆ, ಉಪಾಧ್ಯಕ್ಷರಾಗಿ ಬಾಲಚಂದ್ರ ಕಳಗಿ, ಅಧ್ಯಕ್ಷರು ಪಯಸ್ವಿನಿ ಪ್ರಾ.ಕೃ.ಪ.ಸ. ಸಂಘ ಸಂಪಾಜೆ, ಗಣೇಶ ಕೋಡಿಬೈಲು, ಉದ್ಯಮಿಗಳು ಬೆಂಗಳೂರು, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಬಿ. ಬಾಲಕೃಷ್ಣ ಬಾಳೆಹಿತ್ಲು, ನಿವೃತ್ತ ಪ್ರಧಾನ ವ್ಯವಸ್ಥಾಪಕರು ಕನಕಮಜಲು ಪ್ರಾ.ಕೃ.ಪ.ಸ. ಸಂಘ ಕನಕಮಜಲು, ಉಪ ಕಾರ್ಯದರ್ಶಿಗಳಾಗಿ ರೋಹಿತ್ ಕುಕ್ಕೇಟಿ, ಗಣಪಯ್ಯ ಕೊಡೆಂಕಿರಿ, ಶಭರೀಶ ಕುದ್ಕುಳಿ ಮತ್ತು ಕೋಶಾಧಿಕಾರಿಯಾಗಿ ಜಯಕುಮಾರ್ ಚಿದ್ಕಾರ್ ಇವರುಗಳನ್ನು ನೇಮಕ ಮಾಡಲಾಯಿತು.