ಮಡಿಕೇರಿ, ಡಿ. 5: ಕೊಡಗು ಜಿಲ್ಲಾ ಸಹಕಾರ ಸಗಟು ಮಾರಾಟ ಸ್ಟೋರ್ಸ್ (ಜನತಾಬಜಾರ್)ನ ಅಧ್ಯಕ್ಷರಾಗಿ ನಂದಿನೆರವಂಡ ಎ. ರವಿ ಬಸಪ್ಪ ಪುನರಾಯ್ಕೆಯಾಗಿದ್ದಾರೆ. ಇಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲಿ ರವಿಬಸಪ್ಪ ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ಕಡ್ಲೇರ ಧರ್ಮಪಾಲ ಪ್ರಭು ಅವರು ಆಯ್ಕೆಯಾಗಿದ್ದಾರೆ.

ಸಾಮಾನ್ಯ ವರ್ಗದ ನಿರ್ದೇಶಕರಾಗಿ ಮಡಿಕೇರಿಯ ಕೆ.ಎಸ್. ಪ್ರಕಾಶ್, ಮಹಿಳಾ ಮೀಸಲಾತಿಯಡಿ ಬೇಬಿ ಪೂವಯ್ಯ, ಬಿಸಿಎ (ಎ) ವರ್ಗದಡಿ ಚಿತ್ರಾವತಿ, ಲೀನಾ ಸುದರ್ಶನ್, ಎಸ್.ಸಿ. ಮೀಸಲಾತಿಯಡಿ ಕುಶಾಲನಗರದ ಶಿವರಾಜ್, ಎಸ್.ಟಿ. ಯಿಂದ ಮಡಿಕೇರಿಯ ಕಾಂತಿ, ಸಹಕಾರ ಸಂಘ (ಎ) ತರಗತಿಯಿಂದ ವೀರಾಜಪೇಟೆಯ ಸೋಮಯ್ಯ, ನಾಪೋಕ್ಲುವಿನ ಎನ್.ಯು. ಕಸ್ತೂರಿ, ಸೋಮವಾರಪೇಟೆಯ ಹೆಚ್.ಕೆ. ಮಾದಪ್ಪ, ಸಹಕಾರ ಸಂಘ (ಡಿ) ತರಗತಿಯಿಂದ ಮಡಿಕೇರಿ ಪ್ರೇಮಾ ಸೋಮಯ್ಯ, (ಇ) ತರಗತಿಯಿಂದ ಕುಶಾಲನಗರ ಎಸ್.ಟಿ. ಕೃಷ್ಣರಾಜು, ಅಮ್ಮತ್ತಿಯ ಎನ್.ಕೆ. ನಾಚಪ್ಪ, (ಎಫ್) ತರಗತಿಯಿಂದ ಮಡಿಕೇರಿಯ ಎನ್.ಕೆ. ಅಯ್ಯಣ್ಣ, ಎಂ.ಬಿ. ದೇವಯ್ಯ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಎಂ.ಈ. ಮೋಹನ್ ಕಾರ್ಯನಿರ್ವಹಿಸಿದರು.