ಮಡಿಕೇರಿ, ಡಿ. 5: ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಾ. 7 ರಂದು (ನಾಳೆ) ಬೆಳಿಗ್ಗೆ 10.45 ಗಂಟೆಗೆ ಗರಗಂದೂರಿನ ಚೆನ್ನಮ್ಮ ಪ.ಪೂ. ಕಾಲೇಜಿನ ಫುಟ್ಬಾಲ್ ಮೈದಾನಕ್ಕೆ ಬಂದಿಳಿಯಲಿದ್ದು, ಬಳಿಕ 11.15 ಗಂಟೆಗೆ ಮಾದಾಪುರಕ್ಕೆ ಆಗಮಿಸಲಿದ್ದಾರೆ.ಮಧ್ಯಾಹ್ನ 12.15ಕ್ಕೆ ಜಂಬೂರು ಗ್ರಾಮದಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಸಂಬಂಧ ಮನೆ ನಿರ್ಮಾಣ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ಮಧ್ಯಾಹ್ನ 3 ಗಂಟೆಗೆ ಹಿಂತಿರುಗಲಿದ್ದಾರೆ.