ಕುಶಾಲನಗರ, ಡಿ. 5: ಕೊಪ್ಪ ಗ್ರಾಮದಲ್ಲಿ ಕುಶಾಲನಗರದ ಕಾರ್ಮಿಕ ನಿಗೂಢ ಸಾವನಪ್ಪಿರುವ ಘಟನೆ ನಡೆದಿದೆ. ಕುಶಾಲನಗರ ಬಲಮುರಿ ಗಣಪತಿ ದೇವಾಲಯ ಬಳಿಯ ನಿವಾಸಿ ಸ್ವಾಮಿ (33) ಮೃತಪಟ್ಟ ವ್ಯಕ್ತಿ. ಕಟ್ಟಡ ನಿರ್ಮಾಣ ಬಾರ್ಬೆಡಿಂಗ್ ಕೆಲಸಗಾರ ಸ್ವಾಮಿ ಮೃತದೇಹ ಕೊಪ್ಪ ಮುಖ್ಯ ರಸ್ತೆಯಲ್ಲಿನ ಗ್ರಾಮ ಪಂಚಾಯತಿ ಮಾಂಸ ಮಳಿಗೆ ಹಳೆ ಕಟ್ಟಡದ ರೂಮ್ ಒಂದರಲ್ಲಿ ಬುಧವಾರ ಬೆಳಿಗ್ಗೆ ಕಂಡು ಬಂದಿದೆ. ನಿಗೂಢ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಬೈಲಕೊಪ್ಪ ಪೊಲೀಸರು ಮಹಜರು ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ. ಮೃತ ವ್ಯಕ್ತಿ ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.