ಚೆಟ್ಟಳ್ಳಿ, ಡಿ. 5: ಕೊಡಗಿನ ಸಮನ್ವಯ ವಿದ್ಯಾಕೇಂದ್ರ ಅನ್ವಾರುಲ್ ಹುದಾ ಸೆಂಟರ್ ವತಿಯಿಂದ ಪ್ರವಾದಿ ಮುಹಮ್ಮದ್ ಅವರ 1493ನೇ ಜನ್ಮ ದಿನಾಚರಣೆ ಹಾಗೂ ಮಿಲಾದ್ ಸಂದೇಶ ಜಾಥಾ ಏರ್ಪಡಿಸಲಾಗಿತ್ತು.

ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಿಂದ ಅನ್ವಾರುಲ್ ಹುದಾ ಕ್ಯಾಂಪಸ್‍ವರೆಗೆ ವರ್ಣರಂಜಿತ ಸ್ಕೌಟ್ ಹಾಗೂ ದಫ್‍ನೊಂದಿಗೆ ನಡೆದ ಜಾಥಾದಲ್ಲಿ ಜಿಲ್ಲಾ ನಾಯಿಬ್ ಖಾಜಿû ಮಹ್ಮೂದ್ ಉಸ್ತಾದ್ ಎಡಪಾಲ ಹಾಗೂ ಹುದಾ ಸೆಂಟರ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಸಂದೇಶ ಭಾಷಣ ಮಾಡಿದರು. ಸಾರ್ವಜನಿಕ ಸಭೆಯನ್ನು ಕರ್ನಾಟಕ ಎಸ್.ಎಸ್. ಎಫ್. ಕ್ಯಾಂಪಸ್ ಪ್ರಧಾನ ಕಾರ್ಯದರ್ಶಿ ಯಾಕೂಬ್ ಕೊಳಕೇರಿ ಸ್ವಾಗತಿಸಿದರು. ಉದ್ಘಾಟನೆಯನ್ನು ಸಯ್ಯದ್ ಮಹದಿ ತಂಙಳ್ ಲಕ್ಷದ್ವೀಪ್ ನೆರವೇರಿಸಿದರು. ಅನ್ವಾರುಲ್ ಹುದಾ ವಿದ್ಯಾರ್ಥಿ ಶರೀಫ್ ದಿಕ್ಸೂಚಿ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಎಸ್.ಎಸ್.ಎಫ್. ಕರ್ನಾಟಕ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿû ಕೊಂಡಂಗೇರಿ, ಜಿಲ್ಲಾಧ್ಯಕ್ಷ ಕರೀಂ ¥sóÁಳಿಲಿ, ಪಟ್ಟಣ ಪಂಚಾಯಿತಿ ಸದಸ್ಯ ಮುಹಮ್ಮದ್ ರಾಫಿ, ಮತೀನ್, ಜಿಲ್ಲಾ ಪಂಚಾಯಿತಿ ಸದಸ್ಯ ಲತೀಫ್, ಮುಸ್ತಫ ತಂಙಳ್, ಅನ್ವಾರುಲ್ ಹುದಾ ಪ್ರಾಂಶುಪಾಲ ಅಬ್ದುಲ್ ರಶೀದ್ ಸಹದಿ, ಶಫೀಕ್ ಸಖಾಫಿ ಮುಂತಾ ದವರು ಉಪಸ್ಥಿತರಿದ್ದರು. ಅಬ್ದುಲ್ ರಹ್ಮಾನ್ ಅಹ್ಸನಿ ವಂದಿಸಿದರು.