ಶನಿವಾರಸಂತೆ, ಜ. 9: ಸಮೀಪದ ರಾಮನಹಳ್ಳಿ ಗ್ರಾಮದಲ್ಲಿ ಕೆಲವು ಗ್ರಾಮಸ್ಥರು ಅತಿಕ್ರಮಿಸಿ, ಒತ್ತುವರಿ ಮಾಡಿಕೊಂಡಿದ್ದ 1.96 ಎಕರೆ ಪೈಸಾರಿ ಜಾಗವನ್ನು ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಮಹೇಶ್ ಹಾಗೂ ಕಂದಾಯ ಅಧಿಕಾರಿ ನಂದಕುಮಾರ್, ಸಿಬ್ಬಂದಿಗಳು ತೆರವುಗೊಳಿಸಿದರು.

ಜಿಲ್ಲಾಧಿಕಾರಿ ಸರ್ವೆ ನಂ. 21/1 ರಲ್ಲಿ 65 ಸೆಂಟ್ ಹಾಗೂ 1/1 ರಲ್ಲಿ 45 ಸೆಂಟ್ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವಂತೆ ಆದೇಶಿಸಿದ್ದರೂ ಗ್ರಾಮದ ಕೆಲವರು ಅತಿಕ್ರಮಿಸಿಕೊಂಡಿದ್ದರು. ಜಿಲ್ಲಾಧಿಕಾರಿ ಆದೇಶದನ್ವಯ ಒತ್ತುವರಿ ಜಾಗವನ್ನು ತೆರವುಗೊಳಿಸಿ ಸರಕಾರಿ ಸ್ವಾಧೀನಕ್ಕೆ ಪಡೆದುಕೊಳ್ಳಲಾಯಿತು. ತೆರವುಗೊಳಿಸಿದ ಜಾಗವನ್ನು ಯಾರೂ ಅತಿಕ್ರಮ ಪ್ರವೇಶ ಮಾಡಬಾರದು ಎಂದು ತಹಶೀಲ್ದಾರ್ ಸೂಚಿಸಿದರು.

ರಾಮನಹಳ್ಳಿ ಗ್ರಾಮಸ್ಥರು ಸಾರ್ವಜನಿಕ ಸ್ಮಶಾನಕ್ಕೆ ಜಾಗವನ್ನು ಮೀಸಲಿರಿಸುವಂತೆ ಕೋರಿದರು. ಗ್ರಾಮ ಲೆಕ್ಕಿಗರಾದ ಜಟ್ಟಪ್ಪ, ಸಂತೋಷ್, ಸರ್ವೆ ಇಲಾಖೆ ಅಧಿಕಾರಿಗಳಾದ ಬಿ.ಎಂ. ಹರೀಶ್ಚಂದ್ರ, ನವೀನ್ ಹಾಗೂ ಸಿಬ್ಬಂದಿ ಹಾಜರಿದ್ದರು.