ಸುಂಟಿಕೊಪ್ಪ, ಜ. 9: ಅಪಾಯಕ್ಕೆ ಆಹ್ವಾನ ನೀಡಲು ತಯಾರಾಗಿ ನಿಂತಿರುವ ವಿದ್ಯುತ್ ತಂತಿಯನ್ನು ತೆರವುಗೊಳಿಸಬೇಕು ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.

ಸುಂಟಿಕೊಪ್ಪದ 3ನೇ ವಾರ್ಡಿನ ಕೊಡವ ಸಮಾಜದ ಬಳಿ ಉಲುಗುಲಿ ತೋಟದಲ್ಲಿ ಹಾದು ಬರುವ ವಿದ್ಯುತ್ ತಂತಿಯು ತೋಟದ ಬೇಲಿ ಬಳ್ಳಿ ಕಾಡು ಗಿಡ ಗುಂಟೆಗಳಿಗೆ ತಗುಲಿದ್ದು ಕೆಳಮಟ್ಟಕ್ಕೆ ಬಂದಿದೆ ಇದರಿಂದ ಜಾನುವಾರುಗಳಿಗೆ, ಸ್ಥಳೀಯ ನಾಗರಿಕರಿಗೆ ಯಾವಾಗಬೇಕಾದರೂ ಅಪಾಯ ತಂದೊಡ್ಡಬಹುದು. ಚೆಸ್ಕಾಂ ಇಲಾಖೆಯವರು ಇದನ್ನು ಸರಿಪಡಿಸಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.