* ಸಿದ್ದಾಪುರ, ಫೆ. 17: ನಿನ್ನೆ ಸಿದ್ದಾಪುರ ಸಂತೆ ದಿನವಾಗಿದ್ದು ಒಂದೆಡೆ ಅಕ್ರಮ ಬಾಂಗ್ಲಾ ಮೂಲದವರೆಂದು ಶಂಕಿಸಲಾದ ಹೊರರಾಜ್ಯದ ಕಾರ್ಮಿಕರವನ್ನು ಕಂಡಕಂಡಲ್ಲಿ ಸಾರ್ವಜನಿಕರು ಥಳಿಸಿದ್ದಾರೆನ್ನಲಾಗಿದೆ. ಸಂತೆಗೆ ಬಂದ ಕಾರ್ಮಿಕ ಮಹಿಳೆಯರು ಕೂಡ ಆಕ್ರೋಶಗೊಂಡು ಒಂದಿಬ್ಬರು ಹೊರರಾಜ್ಯದ ಮಹಿಳೆಯರಿಗೆ ಸಂತೆಯೊಳಗೆ ಥಳಿಸಿದ್ದಾಗಿ ತುಳಿದುಬಂದಿದೆ.

ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಕೂಡ ಕೆಲವು ಜನತೆಯ ಗೂಸಾದೊಂದಿಗೆ ಆಕ್ರೋಶವನ್ನು ಎದುರಿಸಿದ ಘಟನೆ ನಡೆಯಿತು. ಸಾಮಾನ್ಯವಾಗಿ ಇಂಥವರು ವ್ಯಾಪಾರಕ್ಕೆ ಹೋಗುತ್ತಿದ್ದ ಕೋಳಿ ಅಂಗಡಿಗಳು, ದಿನಸಿ ಅಂಗಡಿಗಳು ಮತ್ತು ಮೊಬೈಲ್ ಅಂಗಡಿಗಳಲ್ಲಿ ವ್ಯಾಪಾರ ಗೌಣವಾಗಿತ್ತು.

ಸಿದ್ದಾಪುರ ಮತ್ತು ಸುತ್ತ ಮುತ್ತ ವ್ಯಾಪ್ತಿಯ ಕೆಲ ಬೆಳೆಗಾರರು ಅಕ್ರಮ ವಲಸಿಗರನ್ನು ಈ ವಾರದ ವೇತನ ನೀಡಿ ಕಳುಹಿಸಿದ್ದಾರೆ. ಅಹಿತಕರ ಘಟನೆ ನಡೆಯಬಹುದು ಎಂದು ಮುಂಜಾಗ್ರತಾ ಕ್ರಮವಾಗಿ ಸಿದ್ದಾಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹೆಚ್ಚುವರಿ ಸಿಬ್ಬಂದಿಗಳನ್ನು ಪಟ್ಟಣದಲ್ಲಿ ಆಯೋಜಿಸಿದ್ದರು. - ಅಂಚೆಮನೆ ಸುಧಿ