ಮಡಿಕೇರಿ, ಏ. 13: ತಿರಿಬೊಳ್ಚ ಕೊಡವ ಸಂಘ ಮತ್ತು ಪೊನ್ನಂಪೇಟೆ ಕೊಡವ ಸಮಾಜದ ಜಂಟಿ ಆಶ್ರಯದಲ್ಲಿ ತಾ. 16 ರಂದು ವಿಚಾರ ಸಂಕಿರಣ ನಡೆಯಲಿದೆ. ಕೊಡವ ವಿವಾಹದ ಗಂಗಾ ಪೂಜೆಯ ಬಗ್ಗೆ ಜನಜಾಗೃತಿ ಮೂಡಿಸಿ, ಮೂಲ ಪದ್ಧತಿಗೆ ಆದ್ಯತೆ ನೀಡುವ ಸಂಬಂಧ ಈ ವಿಚಾರ ಸಂಕಿರಣ ನಡೆಯಲಿದೆ. ತಿರಿಬೊಳ್ಚ ಕೊಡವ ಸಂಘದ ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ ಮತ್ತು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೇಕ್ಮಾಡ ರಾಜೀವ್ ಬೋಪಯ್ಯ ಮುಂದಾಳತ್ವದಲ್ಲಿ ನಡೆಯಲಿರುವ ಈ ವಿಚಾರ ಸಂಕಿರಣದ ಜೊತೆಗೆ ಕೊಡವ ಭಾಷೆ ಯಲ್ಲಿ ಕ್ವಿಜ್, ಹಾಡುಗಾರಿಕೆ ಸ್ಪರ್ಧೆ ಗಳೂ ನಡೆಯಲಿದೆ. ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ಬೆ. 10 ರಿಂದ 1.30ರವರೆಗೆ ಕಾರ್ಯಕ್ರಮ ನಡೆಯಲಿದೆ.