ವೀರಾಜಪೇಟೆ, ಜು. 10: ಚೆಕ್ ಬೌನ್ಸ್ ಪ್ರಕರಣದಲ್ಲಿ ಇಲ್ಲಿನ ಸುಭಾಷ್‍ನಗರದ ಪುಷ್ಪಾ ಎಂಬಾಕೆಗೆ ಪ್ರಿನ್ಸಿಫಲ್ ಮುನ್ಸಿಫ್ ನ್ಯಾಯಾಧೀಶರು ಆರು ತಿಂಗಳ ಸಜೆ ಹಾಗೂ ರೂ ಆರು ಲಕ್ಷವನ್ನು ದಂಡ ಸಹಿತ ಪಾವತಿ ಸುವಂತೆ ಆದೇಶಿಸಿ ತೀರ್ಪು ನೀಡಿ ದ್ದಾರೆ. ವೀರಾಜಪೇಟೆಯ ಎಂ.ಯು. ಗಣೇಶ್ ಎಂಬವರು ಪುಷ್ಪಾ ಅವರಿಂದ ಇಲ್ಲಿನ ಕಾರ್ಪೋರೇಶನ್ ಬ್ಯಾಂಕ್‍ನ ಚೆಕ್ ಪಡೆದು ತಾ:3.10.2016 ರಂದು ರೂ. 6 ಲಕ್ಷ ಸಾಲ ನೀಡಿದ್ದರು. ಚೆಕ್ ಬೌನ್ಸ್ ಆಗಿದ್ದರಿಂದ ಇಲ್ಲಿನ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಗಣೇಶ್ ಅವರ ಪರವಾಗಿ ವಕೀಲರಾದ ಡಿ.ಸಿ.ಧ್ರುವ ವಾದಿಸಿದರು.