ವೀರಾಜಪೇಟೆ, ಜು. 11 ವೀರಾಜಪೇಟೆ ಜೈನರಬೀದಿಯಲ್ಲಿರುವ ಎರಡು ಶತಮಾನಗಳಿಗೂ ಅಧಿಕ ಇತಿಹಾಸವಿರುವ ಬಸವೇಶ್ವರ ದೇವಸ್ಥಾನದ ನೂತನ ಮಹಾದ್ವಾರದ ಸಮರ್ಪಣೆ ಹಾಗೂ ಉದ್ಘಾಟನೆ ತಾ. 14 ರಂದು ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಎನ್.ಗೋಪಾಲಕೃಷ್ಣ ಕಾಮತ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಮತ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮಣಿಕ್ಕಾರ, ಲಕ್ಷ್ಮಿ ಶ್ಯಾನುಭಾಗ ಸ್ಮರಣಾರ್ಥ ಅವರ ಪತಿ ಎಂ.ಗೋಪಾಲಕೃಷ್ಣ ಶ್ಯಾನು ಭಾಗ ಅವರು ಉದಾರವಾಗಿ ನೀಡಿರುವ ಮಹಾದ್ವಾರದ ಸಮರ್ಪಣೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಸಿದ್ದಾಪುರ ಕರಡಿಗೋಡಿನ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಸಂಚಾಲಕರಾದ ಕಂಬೀರಂಡ ನಂಜಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜೆ.ಎನ್. ವಸಂತದೇವಿ ಭಾಗವಹಿಸಲಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ವಹಿಸಲಿರುವರು ಎಂದು ತಿಳಿಸಿದರು.