ಕೂಡಿಗೆ, ಜು. 11: ಕೊಡಗು ಜಿಲ್ಲಾ ಕಬಡ್ಡಿ ಅಮೆಚೂರು ಅಸೋಸಿಯೇಷನ್ ತೀರ್ಪುಗಾರರ ಸಂಘದ ಅಧ್ಯಕ್ಷರಾಗಿ ಸ.ಮಾ.ಪ್ರಾ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಎ.ಎಂ. ಆನಂದ, ಉಪಾಧ್ಯಕ್ಷರಾಗಿ ಕಣಿವೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಕರುಂಬಯ್ಯ, ಕಾರ್ಯದರ್ಶಿಯಾಗಿ ಪ್ರವೀಣ್ ಆಯ್ಕೆಯಾಗಿದ್ದಾರೆ. ಜಿಲ್ಲಾ ಕಬಡ್ಡಿ ಅಮೆಚೂರು ಅಸೋಸಿಯೇಷನ್ ಅಧ್ಯಕ್ಷ ಉತ್ತಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ನೇಮಕ ಮಾಡಲಾಯಿತು. ಸಂಘದ ಸಂಚಾಲಕರಾಗಿ ಕೃಷ್ಣ, ಸದಸ್ಯರಾಗಿ ಸುರೇಶ್‍ಕುಮಾರ್, ಅಮೃತ್, ಮೋಹನ್, ಸುನೀಲ್, ಅಲೋಕ್, ದೇವಾನಂದ, ಗಣೇಶ, ಕುಶಾಲಪ್ಪ, ಜಯರಾಂ, ರಾಗಿಣಿ, ಕವಿತ, ಭಾರತಿ, ಶೈಲ, ರಮಾನಂದ ಅವರುಗಳು ಆಯ್ಕೆಯಾಗಿದ್ದಾರೆ.