ಕೂಡಿಗೆ, ಜು. 10 : ಜಮೀನಿನಲ್ಲಿ ಹುಲ್ಲು ಕುಯ್ಯುವ ಸಂದರ್ಭ ಹಾವು ಕಚ್ಚಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳೇಕೂಡಿಗೆ ಗ್ರಾಮದಲ್ಲಿ ನಡೆದಿದೆ. ಹಳೇಕೂಡಿಗೆಯ ನಿವಾಸಿ ಚೆನ್ನೇಗೌಡ (75) ಮೃತ ದುರ್ದೈವಿ. ರೈತರಾದ ಚೆನ್ನೇಗೌಡÀರು ಬುಧವಾರ ಬೆಳಿಗ್ಗೆ ಹಸುವಿಗೆ ಹುಲ್ಲು ಕುಯ್ಯಲು ಮನೆಯ ಪಕ್ಕದಲ್ಲೆ ಇದ್ದ ಜಮೀನಿಗೆ ಹೋದ ಸಂದರ್ಭ ಹಾವು ಕಚ್ಚಿದೆ. ಆದರೆ ಇದು ಅವರಿಗೆ ತಿಳಿದು ಬಂದಿಲ್ಲ. ಸ್ವಲ್ಪ ಸಮಯದ ನಂತರ ಅಲ್ಲಿಯೇ ಪ್ರಜ್ಞಾಹೀನಾರಾಗಿ ಬಿದ್ದುದನ್ನು ಕಂಡ ಮನೆಯವರು ತಕ್ಷಣ ಕುಶಾಲನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ತಪಾಸಣೆ ಮಾಡುವ ಸಂದರ್ಭ ಚನ್ನೇಗೌಡ ಅವರು ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಹಾಗೂ ಮೂರು ಮಕ್ಕಳನ್ನು ಅಗಲಿದ್ದಾರೆ.