ಕುಶಾಲನಗರ, ಜು. 10: ಕುಶಾಲನಗರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಅಭಿನಯಿಸುತ್ತಿರುವ ‘ಪ್ರಾರಂಭ’ ಚಿತ್ರದ ಚಿತ್ರೀಕರಣ ನಡೆಯಿತು.

ಮನು ನಿರ್ದೇಶನದ ಮನೋರಂಜನ್ ಮತ್ತು ನಟಿ ಕೀರ್ತಿ ಅಭಿನಯಿಸುತ್ತಿರುವ ಚಿತ್ರದ ಹಾಡಿನ ದೃಶ್ಯವನ್ನು ಕಾವೇರಿ ಮಾತೆ ಪ್ರತಿಮೆ, ಕಾವೇರಿ ನದಿಯ ಪುರಾತನ ಸೇತುವೆ ಮತ್ತು ಕಾವೇರಿ ನದಿ ತಟದ ವ್ಯಾಪ್ತಿಯಲ್ಲಿ ಚಿತ್ರೀಕರಿಸಲಾಯಿತು.