ಕುಶಾಲನಗರ, ಜು. 10: ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಕ್ಯಾಂಟರ್ ಒಂದು ಡಿಕ್ಕಿಯಾಗಿ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಕುಶಾಲನಗರದಲ್ಲಿ ಬುಧವಾರ ಸಂಜೆ ನಡೆದಿದೆ. ಸರಕಾರಿ ಇಂಜಿನಿಯರಿಂಗ್ ಕಾಲೇಜಿನ ನೌಕರ ಸುನಿಲ್ ಎಂಬವರು ಕರ್ತವ್ಯ ಮುಗಿಸಿ ಆಟೋ ರಿಕ್ಷಾದಲ್ಲಿ ಕುಶಾಲನಗರ ಕಡೆಗೆ ಬರುತ್ತಿದ್ದ ಸಂದರ್ಭ ತಾವರೆಕೆರೆ ಬಳಿ ಘಟನೆ ಸಂಭವಿಸಿದೆ.

ಸುನಿಲ್ ಅವರು ಪ್ರಯಾಣಿಕರ ಒತ್ತಡದ ಕಾರಣ ಆಟೋ ರಿಕ್ಷಾದ (ಕೆಎ.12.ಬಿ.1110) ರಾಡ್‍ನಲ್ಲಿ ಕುಳಿತಿದ್ದು ಈ ಸಂದರ್ಭ ಹಿಂದಿನಿಂದ ಬಂದ ಕ್ಯಾಂಟರ್ ಇವರನ್ನು ಸವರಿಕೊಂಡು ಹೋಗಿದೆ ಕ್ಯಾಂಟರ್ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ ತೀವ್ರ ಗಾಯಗೊಂಡ ಸುನಿಲ್ ಕುಶಾಲನಗರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.