ಶನಿವಾರಸಂತೆ, ಜು. 11: ಶನಿವಾರಸಂತೆ ಸಮೀಪದ ದೊಡ್ಡಬಿಳಾಹ ಗ್ರಾಮದ ಪೂರ್ಣತೇಜ ಎಂಬವರ ದನದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ ಕಪ್ಪು ಬಣ್ಣದ ಹಸು, ಕಪ್ಪು ಬಣ್ಣದ ಹೆಣ್ಣು ಕರುವನ್ನು ಕೊಟ್ಟಿಗೆಯಿಂದ ಕಳವು ಮಾಡಿಕೊಂಡು ಗೂಡ್ಸ್ ಆಟೋ (ನಂ ಕೆಎ-12, ಬಿ-3456)ದಲ್ಲಿ ಸಾಗಿಸುತ್ತಿದ್ದಾಗ ಬುಧವಾರ ಬೆಳಗ್ಗಿನ ಜಾವ ಗಸ್ತಿನಲ್ಲಿದ್ದ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರು ಜಾನುವಾರು ಸಹಿತ ಗೂಡ್ಸ್ ಆಟೋ ಹಾಗೂ ಓರ್ವ ಆರೋಪಿ ಲೋಹಿತ್ ಎಂಬಾತನನ್ನು ಬಂಧಿಸಿ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮತ್ತೋರ್ವ ಆರೋಪಿ ಸಲ್ಮನ್ ಎಂಬಾತ ಪರಾರಿಯಾಗಿದ್ದಾನೆ.