ಬೀಡಾಡಿ ನಾನು.., ನನ್ನ ಮಾಲೀಕರೋ ಸಾಕಲಾಗದೆ ಬೀದಿಗೆ ಬಿಟ್ಟಿದ್ದಾರೆ.., ರಸ್ತೆಲಿ ಹೋದರೆ ಜನ ಹೊಡಿತ್ತಾರೆ.., ವಾಹನ ಚಾಲಕರು ಗುದ್ದಲಿಕ್ಕೆ ಬರ್ತಾರೆ.., ನಾನೆಲ್ಲಿ ಹೋಗಲಿ...?? ಯಾರೋ ಹೇಳಿದ್ರು ನಗರಸಭೆಯವರು ದೊಡ್ಡಿಗೆ ಸೇರ್ಸತಾರೆಂತಾ ಅದ್ಕೆ ಇಲ್ಲಿಗೆ ಬಂದ್ರೆ ಗೇಟ್‍ನಿಂದ ಒಳಗೆ ಬಿಡ್ತಿಲ್ಲ.., ???? ಇನ್ನೆಲ್ಲಿ ಹೋಗಲಿ ನಾ...?? ಸಾಕಿದವರಿಗೆ ನಾ ಯಾಕೆ ಬೇಡಾದೇ...?? ನನ್ನಂತೆ ನನ್ನೊಂದಿಗೆ ನಮ್ಮವರು ನೂರಾರು ಇದ್ದಾರೆ, ದಿನಾ ಒಂದಿಲ್ಲೊಂದು ವಾಹನಗಳು ನಮ್ಮನ್ನ ಗುದ್ದಿ ನೋವು ಮಾಡ್ತಿವೆ.., ಒಂದಷ್ಟು ಪುಟ್ಟದಾದ ನಮ್ಮ ಕುಡಿಗಳು ಸತ್ತೇ ಹೋಗಿವೆ....?? ನಾವುಗಳು ನಿಮಗೆ ಬೇಡವೆಂದಾದರೆ ಯಾಕೆ ನಮಗೆ ಜೀವ ಕೊಟ್ಟು ಹೀಗೇ ಬೀದಿಗೆ ಬಿಟ್ಟಿರಿ..., ನಿಮ್ಮ ಮಕ್ಕಳನ್ನ ನೀವು ಹೀಗೆ ಬೀದಿಗೆ ಬಿಡುವಿರಾ..., ಸಾಯಿಸುವಿರಾ..., ಪ್ರಜ್ಞಾವಂತರಾದ ಮನುಜರಾದ ನಿಮ್ಮಲ್ಲಿ ನಮ್ಮದೊಂದು ಪುಟ್ಟ ಕೋರಿಕೆ.., ನಮ್ಮನ್ನ ರಸ್ತೆಗೆ ಬಿಟ್ಟು ನಮ್ಮ ಬಡ., ಏನೂ ಗೊತ್ತಿಲ್ಲದ ದೇಹದ ಮೇಲೆ ನಿಮ್ಮ ಸವಾರಿ ಎಷ್ಟು ಸರಿ..., ??. ನಮ್ಮಿಂದ ತಪ್ಪಾಗಿದ್ದರೆ ಕ್ಷಮಿಸಿ....,, ಇಲ್ಲವಾದರೆ ನಮಗೂ ಒಂದಿಷ್ಟು ಕಾಲದ ಬದುಕು ಕರುಣಿಸಿ.....!

ಕುಡೆಕಲ್ ಸಂತೋಷ್