ಗೋಣಿಕೊಪ್ಪಲು, ಜು. 11: ಸಾರ್ವಜನಿಕ ಕುಡಿಯುವ ನೀರು ಯೋಜನೆಯಲ್ಲಿ ಜಿ.ಪಂ. ಅನುದಾನದಲ್ಲಿ ನಿರ್ಮಾಣಗೊಂಡ ಸುಮಾರು ರೂ. 25 ಲಕ್ಷ ವೆಚ್ಚದ 50 ಸಾವಿರ ಲೀಟರ್ ಸಾಮಥ್ರ್ಯದ ಓವರ್ ಹೆಡ್ ಟ್ಯಾಂಕನ್ನು ಬಾಳೆಲೆ ಜಿ.ಪಂ. ಸದಸ್ಯ ಬಿ.ಎನ್. ಪ್ರಥ್ಯು ಉದ್ಘಾಟಿಸಿದರು.

ಬಾಳೆಲೆ ಗ್ರಾ.ಪಂ. ವ್ಯಾಪ್ತಿಯ ದೇವನೂರು-ಕುಡುಂಬೂರು ಗ್ರಾಮದ ನಿವಾಸಿಗಳಿಗೆ ಹಲವು ವರ್ಷಗಳಿಂದ ಕುಡಿಯುವ ನೀರಿನ ಬವಣೆ ಇದ್ದು, ಉದ್ಧೇಶಿತ ಯೋಜನೆ ಅನುಷ್ಠಾನದಿಂದ ಸುಮಾರು 200 ಕುಟುಂಬಗಳಿಗೆ ಸಹಕಾರಿಯಾಗಲಿದೆ ಎಂದು ಪ್ರಥ್ಯು ತಿಳಿಸಿದ್ದಾರೆ.

ಬಾಳೆಲೆ ಗ್ರಾ.ಪಂ. ಅಧ್ಯಕ್ಷೆ ಕಾಂಡೇರ ಕುಸುಮಾ ಶೇಖರ್, ಉಪಾಧ್ಯಕ್ಷ ಕೊಕ್ಕೇಂಗಡ ರಂಜನ್, ಸ್ಥಳ ದಾನಿ ಅಡ್ಡೇಂಗಡ ನಾಚಯ್ಯ, ಸದಸ್ಯ ಪಿ.ಎಸ್. ಮುತ್ತಮ್ಮ, ಪಿಡಿಓ ಶ್ರೀನಿವಾಸ್, ಗ್ರಾಮಸ್ಥರಾದ ಎಂ.ಟಿ. ಕುಮಾರ್, ಹೆಚ್.ಸಿ. ರಾಜು, ಸಣ್ಣುವಂಡ ಸುರೇಶ್, ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.