ಕೂಡಿಗೆ, ಜು. 11: ಕೂಡಿಗೆ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಸದಸ್ಯತ್ವ ನೋಂದಣೆ ಮಾಹಿತಿ ಕಾರ್ಯಕ್ರಮಕ್ಕೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಚಾಲನೆ ನೀಡಿದರು.

ಪಕ್ಷ ಸಂಘಟನೆಗೆ ಎಲ್ಲರೂ ಸದಸ್ಯರಾಗಬೇಕು ಅಲ್ಲದೆ ತಮ್ಮ ತಮ್ಮ ಬೂತ್ ಮಟ್ಟದ ಯವಕರು ಹಾಗೂ ಬಿಜೆಪಿ ಅಭಿಮಾನಿಗಳನ್ನು ಸದಸ್ಯರು ಗಳನ್ನಾಗಿ ಮಾಡುವ ಮೂಲಕ ಪಕ್ಷ ಸದೃಢವಾಗಲು ಎಲ್ಲರೂ ಕಾರ್ಯೋನ್ಮುಖರಾಬೇಕು ಎಂದರು. ಮಂಡಲ ಸದಸ್ಯತ್ವ ನೋಂದಣಿಯ ಸಂಚಾಲಕ ಮನು ರೈ ಪ್ರಾಸ್ತ್ತವಿಕವಾಗಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜಳಾ, ತಾಲೂಕು ಪಂಚಾಯಿತಿ ಸದಸ್ಯ ಗಣೇಶ್ ಮಾತನಾಡಿದರು. ಕೆ. ವರದ ಕೆ.ಕೆ. ಭೋಗಪ್ಪ, ಕುಮಾರಸ್ವಾಮಿ, ಪ್ರಭಾಕರ, ಕೆ.ಟಿ. ಗೀರಿಶ್, ಸಾವಿತ್ರಿ ರಾಜ, ಕೆ.ಎಂ. ಚಂದ್ರ, ಎರಡು ಗ್ರಾಮ ಪಂಚಾಯಿತಿ ಸ್ಥಾನೀಯ ಸಮಿತಿಯ ಅಧ್ಯಕ್ಷರುಗಳು, ವಿವಿಧ ಘಟಕಗಳ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಹಾಜರಿದ್ದರು.