ಸುಂಟಿಕೊಪ್ಪ, ಜು. 11: ಕೆದಕಲ್ ಗ್ರಾಮ ಪಂಚಾಯಿತಿ ವತಿಯಿಂದ ಶೇ. 25ರ ಅನುದಾನದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ 40 ಜನರಿಗೆ ಸೋಲಾರ್ ದೀಪವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎ. ಬಾಲಕೃಷ್ಣ ರೈ ವಿತರಿಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀಣಾ, ಗ್ರಾಮ ಪಂಚಾಯಿತಿ ಸದಸ್ಯರಾದ ದೇವಿಪ್ರಸಾದ್ ಕಾಯರ್ ಮಾರ್, ವೆಂಕಪ್ಪ ಸಿಬ್ಬಂದಿಗಳಾದ ಬಾಲಚಂದ್ರ, ರಾಮಚಂದ್ರ ಫಲಾನುಭವಿಗಳು ಹಾಜರಿದ್ದರು.