ವೀರಾಜಪೇಟೆ, ಜು. 11: ಪಂಜರ್‍ಪೇಟೆಯ ವರ್ತಕ ಎನ್.ಡಿ.ಅನಿಲ್ ಕುಮಾರ್ ಹಾಗೂ ಆತನ ಸಂಗಡಿಗ ರಾಜೇಶ್ ಎಂಬವರ ಮೇಲೆ ಹಲ್ಲೆ ಮಾಡಿದ ಆರೋಪದ ಮೇರೆ ಇಲ್ಲಿನ ಎಂ. ಸುರೇಶ್ ಎಂಬಾತನಿಗೆ ಎರಡು ವರ್ಷ ಸಜೆ, ಹಲ್ಲೆಗೆ ಸಹಕರಿಸಿದ ಪಿ. ಕಾರ್ಯಪ್ಪ ಎಂಬಾತನಿಗೆ ಆರು ತಿಂಗಳ ಸಜೆ ಹಾಗೂ ರೂ. 14000 ದಂಡ ವಿಧಿಸಿ ಇಲ್ಲಿನ ಪ್ರಿನ್ಸಿಫಲ್ ಮುನ್ಸಿಫಲ್ ನ್ಯಾಯಾಲಯದ ನ್ಯಾಯಾಧೀಶ ಶಿವಾನಂದ ಅಂಚಿ ತೀರ್ಪು ನೀಡಿದ್ದಾರೆ.

ತಾ. 20.5.2016 ರಂದು ರಾತ್ರಿ 9.30ರ ಸಮಯದಲ್ಲಿ ಇಲ್ಲಿನ ಪಂಜರ್‍ಪೇಟೆಯ ಸೆರಿನಿಟಿಹಾಲ್ ಮುಂಭಾಗ ವಾಹನದಲ್ಲಿ ಬಂದು, ಅನಿಲ್ ಕುಮಾರ್‍ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಬ್ಬಿಣದ ಸಲಾಕೆಯಿಂದ ತಲೆಗೆ ಹಲ್ಲೆ ನಡೆಸಿ ಜೊತೆಯಲ್ಲಿದ್ದ ರಾಜೇಶ್ ಮೇಲೂ ಹಲ್ಲೆ ಮಾಡಿದ್ದ ಬಗ್ಗೆ ಸುರೇಶ್ ಹಾಗೂ ಕಾರ್ಯಪ್ಪ ವಿರುದ್ಧ ಇಲ್ಲಿನ ನಗರ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಸರಕಾರದ ಪರ ಸರಕಾರದ ಸಹಾಯಕ ಅಭಿಯೋಜಕ ಶ್ರೀನಿವಾಸ್ ವಾದಿಸಿದರು.