ಮಡಿಕೇರಿ, ಸೆ.16 : ನಗರದ ದೇಚೂರು ಅಶ್ವತ್ಥ ಕಟ್ಟೆಯ ಬಳಿ ಹಾಗೂ ಕೋಟೆ ಮಾರಿಯಮ್ಮ ದೇವಾಲಯ ಬಳಿ ರಸ್ತೆಯಲ್ಲಿ ಭಾರೀ ಹೊಂಡಗಳು ಉಂಟಾಗಿ ವಾಹನಗಳ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹದಗೆಟ್ಟ ರಸ್ತೆಯ ಬಗ್ಗೆ ನಗರಸಭೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಕಿಡಿಕಾರಿರುವ ನಾಗರಿಕರು ತಕ್ಷಣವೇ ರಸ್ತೆ ಸರಿಪಡಿಸಲು ಆಗ್ರಹಿಸಿದ್ದಾರೆ. ತಪ್ಪಿದಲ್ಲಿ ರಸ್ತೆಯ ಗುಂಡಿಗಳಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟಿಸುವದಾಗಿ ‘ಶಕ್ತಿ’ ಗೆ ನೀಡಿರುವ ಹೇಳಿಕೆಯಲ್ಲಿ ವರ್ತಕ ವಿಶ್ವನಾಥ ಹಾಗೂ ಇತರರು ತಿಳಿಸಿದ್ದಾರೆ.