*ಸಿದ್ದಾಪುರ, ಸೆ. 16: ವಾಲ್ನೂರು ತ್ಯಾಗತ್ತೂರು ಗ್ರಾ. ಪಂ. ವ್ಯಾಪ್ತಿಯ ನಿವೇಶನ ರಹಿತರು, ಲೈನ್‍ಮನೆಯಲ್ಲಿ ರುವವರ ಮಾಹಿತಿ ಯನ್ನು ಕಲೆಹಾಕಿ ಗ್ರಾ.ಪಂ.ನಿಂದ ತಾಲೂಕು ಪಂಚಾಯಿತಿಗೆ ರವಾನಿಸಲಾಗಿದ್ದು, ಇದೀಗ ಸರಕಾರಿ ಪೈಸಾರಿ ಜಾಗದ ಸರ್ವೆ ಕಾರ್ಯವನ್ನು ನಡೆಸಲಾಗುತ್ತಿದೆ. ಸರಕಾರದ ಆದೇಶದಲ್ಲಿ ಆಭ್ಯತ್‍ಮಂಗಲ ವ್ಯಾಪ್ತಿಯಲ್ಲಿ ಪೈಸಾರಿ ಜಾಗವನ್ನು ಪತ್ತೆ ಹಚ್ಚಲು ಸರ್ವೆ ಇಲಾಖೆ ಕಾಯೋನ್ಮುಖವಾಗಿದೆ.

ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಫಿ ತೋಟದ ಲೈನ್‍ಮನೆಯಲ್ಲಿ ಹಾಗೂ ಬಾಡಿಗೆ ಮನೆಯಲ್ಲಿ ನೆಲೆಸಿರುವ 350 ಕುಟುಂಬವನ್ನು ಗ್ರಾ.ಪಂ.ನಿಂದ ಪತ್ತೆ ಹಚ್ಚಲಾಗಿದೆ.