ಸೋಮವಾರಪೇಟೆ, ಸೆ.18: ಸಮೀಪದ ಶಾಂತಳ್ಳಿಯಲ್ಲಿ ಕಾಟಿಗಳ ಹಾವಳಿ ಮಿತಿ ಮೀರಿದ್ದು, ಕೃಷಿಕರು ಬೆಳೆದಿರುವ ಕೃಷಿ ಫಸಲು ನಷ್ಟವಾಗುತ್ತಿದೆ.

ಶಾಂತಳ್ಳಿ ಗ್ರಾಮದ ರೈತ ರಘುಕುಮಾರ್ ಅವರಿಗೆ ಸೇರಿದ ಗದ್ದೆಗೆ ನಿನ್ನೆ ರಾತ್ರಿ ಲಗ್ಗೆಯಿಟ್ಟಿರುವ ಕಾಟಿಗಳ ಹಿಂಡು, ನಾಟಿ ಮಾಡಿದ್ದ ಭತ್ತದ ಪೈರನ್ನು ತಿಂದು ಸಂಪೂರ್ಣವಾಗಿ ನಾಶಗೊಳಿಸಿದೆ. ಸ್ಥಳಕ್ಕೆ ಸಂಬಾರ ಮಂಡಳಿ ನಿರ್ದೇಶಕ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಅವರು ಭೇಟಿ ನೀಡಿದ್ದು, ವನ್ಯಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಅರಣ್ಯ ಇಲಾಖಾ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.