ಕೂಡಿಗೆ, ಸೆ. 18: ಹೆಬ್ಬಾಲೆಯಲ್ಲಿರುವ ನೀರು ಬಳಕೆದಾರರ ಸಹಕಾರ ಸಂಘದ ಕಟ್ಟಡದ ಹಿಂಭಾಗದ ಕೊಠಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿದೆ.

ಸಹಕಾರ ಸಂಘದ ಮಹಾಸಭೆಯ ಹಿನ್ನಲೆಯಲ್ಲಿ ಶುಚಿತ್ವಗೊಳಿಸಲು ತೆರಳಿದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ. ದುರ್ವಾಸನೆಯಿಂದ ಕೂಡಿದ ಶವವನ್ನು ಕಂಡ ಗ್ರಾಮಸ್ಥರು, ಶಿರಂಗಾಲ ಗ್ರಾಮದ ಗಿರೀಶ್ (40) ಎಂದು ಗುರುತಿಸಿದ್ದಾರೆ. ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನಂದೀಶ್ ಕುಮಾರ್ ಭೇಟಿ ನೀಡಿ ಪ್ರಕರಣ ನಡೆಸಿದ್ದಾರೆ.