ವೀರಾಜಪೇಟೆ, ಸೆ.18: ಕೊಡಗು ಜಿಲ್ಲಾ ಮಾಜಿ ಸೈನಿಕರ ಸಹಕಾರ ಸಂಘದ ವತಿಯಿಂದ ಹುತಾತ್ಮ ಯೋಧರ ಸ್ತಂಭಕ್ಕೆ ನಿವೃತ್ತ ಅಧಿಕಾರಿಗಳಾದ ಕರ್ನಲ್ ಚೊಂದಂಡ ಕಾಶಿ ಅಯ್ಯಪ್ಪ, ಚೆಪ್ಪುಡಿರ ಮುತ್ತಣ್ಣ, ಕಂಡ್ರತಂಡ ಸುಬ್ಬಯ್ಯ, ಪಾಂಡಂಡ ಮುತ್ತಣ್ಣ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಜಂಟಿ ನಿರ್ದೇಶಕಿ ಗೀತಾ ಸೇನಾ ಮಹಾಬಲ ಶೆಟ್ಟಿ, ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಚೇಂದ್ರಿಮಾಡ ಗಣೇಶ್ ನಂಜಪ್ಪ ಸೇರಿದಂತೆ ಹಲವಾರು ಗಣ್ಯರು ಪುಷ್ಪಗುಚ್ಚ ಇರಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಡಿಎಆರ್ ಪೊಲೀಸ್ ತುಕಡಿಯಿಂದ ಮೂರು ಸುತ್ತು ಕುಶಾಲತೋಪು ಹಾರಿಸಿ ಹುತಾತ್ಮರಿಗೆ ಗೌರವ ಸಲ್ಲಿಸಲಾಯಿತು.ಇದೇ ಸಂದರ್ಭ ಕೊಡವ ಸಮಾಜ, ಹೆಗ್ಗಡೆ ಸಮಾಜ, ಕರ್ನಾಟಕ ಸಂಘ, ಆಟೋ ಚಾಲಕರ ಮಾಲೀಕರ ಸಂಘದ ಪದಾಧಿಕಾರಿ ಗಳು, ಸ್ಟೇಟ್‍ಬ್ಯಾಂಕ್ ವ್ಯವಸ್ಥಾಪಕ ಹಾಗೂ ಸಿಬ್ಬಂದಿ, ಮಾಜಿ ಸೈನಿಕರು ಗಳು, ಸಾರ್ವಜನಿಕರು ಉಪಸ್ಥಿತರಿದ್ದರು.